ಬುಧವಾರ, ಡಿಸೆಂಬರ್ 10, 2014

ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........

ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........: "ಪ್ರೀತಿಯೆ೦ಬ ಹುಚ್ಚು ಹೊಳೆಗೆ ಬಿದ್ದಾಗ" "ಆಗಸದ ಸೂರ್ಯ ಕೆ೦ಪೇರಿ ಒಡಲ ಸೇರುವಾಗ" "ಬಾನ ಹಕ್ಕಿಯು ತನ್ನ ಜೊತೆಗಾತಿಯ ಕೂಡಿಕೊ೦ಡಾಗ ಕಲ್ಲೋಂದು ತೂರಿಬಂದು ತಾಕಿದಾಗ.... ಅದೇ ಅನುಭವ ಪ್ರೀತಿ ಸೋತಾಗ ಆಗುವುದು.... 

ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........

ಮರೆಯಾಯಿತು ಮನಸು ಮೌನದ ಹಿಂದೆ...: ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು...........: "ಪ್ರೀತಿಯೆ೦ಬ ಹುಚ್ಚು ಹೊಳೆಗೆ ಬಿದ್ದಾಗ" "ಆಗಸದ ಸೂರ್ಯ ಕೆ೦ಪೇರಿ ಒಡಲ ಸೇರುವಾಗ" "ಬಾನ ಹಕ್ಕಿಯು ತನ್ನ ಜೊತೆಗಾತಿಯ ಕೂಡಿಕೊ೦ಡಾಗ &quo...

ಶುಕ್ರವಾರ, ಜನವರಿ 10, 2014

ನನ್ನಮ್ಮ ನನಗೆ ದೇವರು..........

ನನಗಿನ್ನು ಸ್ಪಷ್ಟವಾಗಿ ನೆನಪಿದೆ ಆಗ ನಾನು ಆರನೇ ತರಗತಿ ಓದುತ್ತಿದ್ದೆ, ಆದಿನಗಳಲ್ಲಿ ಹಬ್ಬಕ್ಕೆ ಬಿಟ್ಟರೆ ಬಟ್ಟೆ ಸೇರಿದಂತೆ ಮೊದಲಾದ ವಸ್ತುಗಳನ್ನು ತರುತ್ತಿದ್ದದ್ದು ಸಂಭಂದಿಕರ ಮದುವೆಗೇ ಸರಿ.
                                                            ಅದು ಮಾವನ ಮದುವೆ ಚಿಕ್ಕಿಯೋಟ್ಟಿಗೆ ಶಾಪಿಂಗ್ ಗೆ ಸಿದ್ದವಾದೆವು ಅಮ್ಮ
ನಾನು ಅಕ್ಕ ಅದೆಷ್ಟು ಸಂಭ್ರಮ ಆದಿನಗಳು ಮತ್ತೆ ಬರಲಾರವು ಬಾಲ್ಯದ ನೆನಪುಗಳೇ ಹಾಗೆ. ದಿನವಿದೀ ಸುತ್ತಿ ಹೊಸ ಅಂಗಿ ಚಪ್ಪಲ್ಲಿ ಎಲ್ಲವೂ ಕೋಂಡೆವು ಅಮ್ಮನಿಗೆ ಪಪ್ಪ ಆಗಿನ್ನು ತಂದಿದ್ದ ಹೋಸಸೀರೆ ಇದ್ದರಿಂದ ಮತ್ತೆ ಸೀರೆ ಕೊಳ್ಳಲ್ಲಿಲ್ಲ ಅಮ್ಮನಿಗೆ ಚಪ್ಪಲಿ ಕೋಳ್ಳಲು ಮೂರ್ನಾಲ್ಕು ಅಂಗಡಿ ಸುತ್ತಿದ್ದೆವು ಅಮ್ಮನ ಪಾದ ಮಕ್ಕಳಂತೆ ಸಣ್ಣದ್ದು, ಆದ್ದರಿಂದ ಬೇಗ ಒಳ್ಳೆಯ ಚಪ್ಪಲಿ ಸಿಗಲ್ಲಿಲ್ಲ ಅಷ್ಟಕ್ಕೆ ಅಮ್ಮ ಸಾಕು ಹಳೆಯದೇ ಇದೆಯಲ್ಲ ಇನ್ನು ಮನೆಗೆ ಹೋಗುವ ಎಂದವರೇ ಯಾರ ಮಾತು ಕೇಳದಂತೆ ಆಟೋ ಕೂಗಿಯೇ ಬಿಟ್ಟರು. ಮಕ್ಕಳಿಗೆಂದರೆ ಸಾಲು ಸಾಲು ಅಂಗಡಿ ಸುತ್ತುವ ಅಮ್ಮ ಮಕ್ಕಳಿಗಾಗಿ ಏನೆಲ್ಲಮಾಡುವ ಅಮ್ಮ ತಮಗೆಂದರೆ ಯಾಕೆ ತಾಳ್ಮೆ ವಹಿಸಲ್ಲಿಲ್ಲ ಎಂದು ನನಗೆ ಅರ್ಥವಾಗಲೇ ಇಲ್ಲ ಆಟೋದಲ್ಲಿ ಕುಳಿತನಾನು ಮೆಲ್ಲಗೆ ಅಮ್ಮನತ್ತ ನೋಡಿದೆ ಬೆಳಗ್ಗಿನಿಂದ ಸುತ್ತಿದ್ದ ಆಯಾಸ್ಸಕ್ಕೋ ಏನೋ ಗೊತ್ತಿಲ್ಲ ಮುಖ ಪೂರ್ತಿ ಸೋತಿತ್ತು ನನಗಾಗ ಸಣ್ಣವಯ್ಯಸ್ಸಾದ್ದರಿಂದ ನನಗೆ ಬೇರೆ ಯಾವುದೂ ಕಾರಣ ಕಾಣಲ್ಲಿಲ್ಲ ಚಪ್ಪಲಿ ಸಿಗದಿದ್ದಕ್ಕೇ ಅಮ್ಮ ಬೇಜಾರಾಗಿದ್ದಾರೆಂದು ನಾನು ಅತ್ತಿದ್ದೆ ..... 

                                                             ಜಗತ್ತಿನ ಶಕ್ತಯನ್ನು ಒಂದೆಡೆ ಕೂಡುಹಾಕಿದರೂ ಅಮ್ಮನ ಪ್ರೀತಿಗೆ ಸಮ ತೂಗಲಾರದು ಅಮ್ಮ ಶಬ್ದವೇ ಉನ್ಮಾದ ತರುವಂತದ್ದು ಎಲ್ಲಾ ಮಕ್ಕಳ ಬದುಕಲ್ಲೂ ಹೀಗೋಂದು ಅನುಭವ ಆಗಿರಬಹುದೆಂಬ ಖಾತ್ರಿಯಲ್ಲಿ ಹೇಳುತ್ತಿದ್ದೇನೆ ಯಾವುದೊ ಕಥೆಯಲ್ಲಿ ಜೀವಂತ ವ್ಯಕ್ತಿಗಳಲ್ಲಿ ತ್ಯಾಗ ಮಮತೆಯ ಬಗ್ಗೆ ಓದಿ ಭಾವುಕರಾಗುತ್ತೇವೆ ಆದರೆ ಎಲ್ಲರ ಮನೆಯಲ್ಲೂ ದೀಪದಂತೆ ಬೆಳಗುತ್ತಿರುವ ಅಮ್ಮ ಆಕೆಯ ತ್ಯಾಗದ ಬಿಕ್ಷೆಯೇ ನಮ್ಮ ಬದುಕು ಆಕೆಯ ಒಲವಿನ ಋಣಕ್ಕೆ ನಾವೆಲ್ಲ ಅದೆಷ್ಟು ಆಭಾರಿಯೋ.


                                                             ...........  ರಮ್ಯ.ಜೆ

ಸೋಮವಾರ, ಡಿಸೆಂಬರ್ 23, 2013

ನಿನ್ನ ಪ್ರೇಮದ ಋಣಕ್ಕೆ ಬಿದ್ದೆನೋ
ನೀ ಬೇಕು ಎಂಬ ಹಟಕ್ಕೆ ಬಿದ್ದೆನೋ
ತಿಳಿಯುತ್ತಿಲ್ಲ.........

ಕಟ್ಟಿಟ್ಟ ಕನಸುಗಳನ್ನೆಲ್ಲ
ನನಸು ಮಾಡುವ ಹುಂಬತನ ನಂದು
ತಿಳಿದ್ದಿಲ್ಲ ಇದರ ಅಂತ್ಯ ಏನೆಂದು.....


ಬೇಕೇ ಈ ದಾಸ್ಯ
ಎಂಬ ಪ್ರಶ್ನೆ ಕಾಡಿದರೂ
ನೀ ನಿರದ ಬದುಕಿಗೆ  ಅರ್ಥ ಹುಡುಕುವ
ದೈರ್ಯ ನನಗಿಲ್ಲ .......



               ರಮ್ಯ.ಜೆ


ಗುರುವಾರ, ಅಕ್ಟೋಬರ್ 31, 2013

ಪ್ರೀತಿಗೆ ಎಲ್ಲೆ ಇಲ್ಲ ಅಂದ ಮೇಲೆ 
ಪ್ರೀತಿ ಒಂದು ಅಪೂರ್ಣತೆಯ ಭಾವವಾ....?
ನನಗೇ ಬೇಕು ಎನ್ನುವ ಮನಸಿದ್ದ ಮೇಲೆ 
ಸ್ವಾರ್ಥಕ್ಕೂ ಪ್ರೀತಿಗೂ ಬೇದವೆಲ್ಲಿದೆ.....?

ಕೊಟ್ಟು ಪಡೆಯಲು ಪ್ರೀತಿ
ವ್ಯಾಪಾರವಲ್ಲ ಅಂದ ಮೇಲೆ
ಬರೀ ಪಡೆದವನ
ಋಣದ ಬಾಪ್ತು ತೀರುವುದೆಂತು....?

ಪ್ರೀತಿ ಗುಲಾಮಗಿರಿ ಅಲ್ಲ ಎಂದ ಮೇಲೆ
ಶರಣಾಗುವುದಕ್ಕೆ ಬೇರೆ ಅರ್ಥ ವೇನು
ಪ್ರೀತಿ ಯಲ್ಲಿ ಸೋಲುವುದು ಎಂದರೆ
ಗೆಲ್ಲುವುದಕ್ಕೂ ಬೇರೆ ಅರ್ಥ ವಿದೆಯೇ....?

ಈ ಗೌಜುಗಳು ಸಂತೆ ನನಗೆ ಬೇಡ
ಪ್ರೀತಿ ಅರ್ಥವಾ ಕೆಣಕಿ
ವೇದಾಂತಿ ಯಾಗುವಾ
ಬಯಕೆಯೂ ನನಗಿಲ್ಲ....

ನಲ್ಮೆಯ ಕಣ್ಗಳೋಂದಿಗೆ
ಬದುಕ ಯಾತ್ರೆಯಾ ಮುಗಿಸ ಬಂದಿರುವೆ
ವಾತ್ಸಲ್ಯವೋ ಮಮಕಾರವೋ ಕಡೆಗೆ ಪ್ರೀತಿಯೋ
ನನಗೆ ಅದರ ಅರ್ಥ ಗೊತ್ತಿಲ್ಲ

ನನ್ನದೆಂದು ಸಾಗುತ್ತಿರುವೆ
ಈ....... ದಾರಿ ಕಡೆಗೆ
ಸಾರ್ಥಕತೆಯ ಭಾವ ಉಳಿದರೆ
ಅಷ್ಟೆ ಸಾಕು ಜನುಮದ್ದುದಕ್ಕೂ....

.........ರಮ್ಯ.ಜೆ

ನಾನು ಯಾರು.....?

ನಾನು ಯಾರು.....?
ಹುಟ್ಟುತ್ತಲೆ ಅಸಹನೆಯ 
ಮಾತನ್ನುಮೌನವಾಗಿ
ಅರಗಿಸಿ ಕೋಂಡವಳು

ಶತಮಾನಗಳಿಂದಾಚೆ
ಚರಿತ್ರೆ ಪುಟಗಳಲ್ಲಿ ಮೆರೆದವಳು
ಮತ್ತೆ ನಿನ್ನ ಸ್ವಾರ್ಥಕ್ಕೆ
ಮುಖ ಮುಚ್ಚಿ ಅತ್ತವಳು

ನೂರಾರು ಕನಸ್ಸನ್ನು
ಕಣ್ಣಲ್ಲೆ ಮುಚಿಟ್ಟು
ಕಣ್ಮುಚ್ಚಿ ನನ್ನ
ದಾಳಕ್ಕೆ ಕುಣಿದವಳು

ನಿನ್ನ ನೂರಾರು ಚಾಟಿಯೇಟಿಗೆ
ಬೆನ್ನೊಡ್ಡಿ ನನ್ನ ಅಸ್ತಿತ್ವ ಕಾದು ಕೋಂಡವಳು
ಮತ್ತೆ ನಿನ್ನೆದುರು ತಲೆ ಎತ್ತಿ ನಿಂತವಳು
ಸಮಾನತೆಯ ಅಸ್ತ್ರಬಳಸಿ ನಿನ್ನೆದುರು ಸೆಟೆದು ನಿಂತವಳು

ಅಲ್ಲಿ ಗಂಡನ ಕೈಗೆ ಸಿಕ್ಕಿ ಅರಚಿದವಳು
ಇಲ್ಲಿ ಯಾರದ್ದೋ ತ್ರಿಷೆಗೆ ಮೈಯೋಡ್ಡಿ
ಯಮ ಯಾತನೆಗೆ ಬಲಿಯಾದವಳು
ಮತ್ತೆಲ್ಲೋ ಶಕ್ತಿ ಕುಂದಿದಾಗ ಆಸರೆಗೆ ಅಂಗಲಾಚಿದವಳು

ಹೌದು ನಾನೆ....!
ತಾಯಾಗಿ ಹಾಲುಣಿಸಿದವಳು
ಮಗಳಾಗಿ ಮಮತೆ ಇತ್ತವಳು
ಮಡದಿಯಾಗಿ ಒಲವ ಹಂಚಿದವಳು
ನಾನೀಗ ಕೇಳಬೇಕೆದೆ ನಿನಗೆ, ನಾನು
ನಿನ್ನ ಪಾಲಿಗೆ ಯಾರ......????

                   

                                       ರಮ್ಯ.ಜೆ



                                                                   

            

ಸೋಮವಾರ, ಸೆಪ್ಟೆಂಬರ್ 30, 2013

ಅಜ್ಜಿ ಮನೆ ಈಗ ನೆನಪಷ್ಟೇ......


ತೀರ್ಥಹಳ್ಳಿಯ ಬಳಿ ಹಳ್ಳಿಯ ಮನೆ ನಮ್ಮಜ್ಜಿ ಮನೆ ನನ್ನ ಪಾಲಿಗೆ ಅದು ಬರಿ ಮನೆ ಅಲ್ಲ ನನ್ನ ಬಾಲ್ಯದ ಸಾವಿರ ನೆನಪುಗಳ ಕಣ್ಮಂದೆ ತರಿಸುವ ಸ್ವರ್ಗ.  ಅಕ್ಕ ನೋಂದಿಗೆ ಆಡುತ್ತಿದದ್ದು, ಪಪ್ಪ ತಂದುಕೊಟ್ಟಿದ್ದ ಪ್ಲಾಸ್ಟಿಕ್ ಜೋಕಾಲಿ ಮರಕ್ಕೆ ಕಟ್ಟಿ ದಿನ ಪೂರ ತೂಗುತ್ತಿದ್ದದ್ದು, ತಂಗಿ ತಮ್ಮ ನೋಂದಿಗೆ ಊರುಸುತ್ತಿದ್ದು, ಊರಾಚೆ ಮನೆಯಲ್ಲಿ ಮಾವು ಕದ್ದು ತಿಂದದ್ದು ಎಲ್ಲ ಆಗಾಗ ನನ್ನ ಕಾಡುವ ಮನಕೆ ತಂಪು ತರಿಸುವ ನೆನಪುಗಳು.....

       ಕೆಲವು ದಿನ ಕಳೆದ ನಂತರ ಅಜ್ಜಿ ಮನೆಗೆ ಹೋದಾಗ ಹಳೆಯ ಮನೆಯನ್ನು ನವೀಕರಿಸಿದ್ದರು,  ಎಲ್ಲ ಹೊಸತು ನೋಡಲು ಮುದ ಯೆನಿಸಿದ್ದರೂ, ಮನಸು ಹಳೆಯ ಮನೆಯ ನೆನಪುಗಳಿಂದಾಚೆ ಸಾಗಲು ಬಯಸಿರಲಿಲ್ಲ, ನಾವು ನೆಗೆದಾಡುತ್ತಿದ್ದ ಮಾವ ಮಲಗುತ್ತಿದ್ದ ಸಿಮೆಂಟ್ ನ ಕಟ್ಟೆ ಯ ಜಾಗದಲ್ಲಿ ಕಾಟ್ ಬಂದಿತ್ತು, ದೀಪಾವಳಿಯಲ್ಲಿ ಪಟಾಕಿ ಸದ್ದಿಗೆ ನಾವು ಹೆದರಿ ಅಡಗುತ್ತಿದ್ದ ಅಡುಗೆ ಮನೆ ಈಗ ಮೊದಲಿನಷ್ಟು ವಿಶಾಲವಾಗಿಲ್ಲ ಎಲ್ಲ ಬದಲಾಗಿತ್ತು ಮನಸ್ಸು ಒಪ್ಪದಿದ್ದಷ್ಟು.

ಕೆಲವೇ ವರ್ಷ ದಲ್ಲಿ ಮಾವ ಮಾಮಿ ತೀರಿಕೋಂಡ ಬಳಿಕ ಮತ್ತೆ ಯಾರಿಗು ಆ ಮನೆಯಲ್ಲಿ ಇರುವ ಪರಿಸ್ಥಿತಿಯಾಗಲಿ ಮನಸಾಗಲಿ ಇರಲಿಲ್ಲ,  ಸಂಭಂದಿಕರೊಬ್ಬರ ಮದುವೆಗೆ ಹೋದಾಗ ಮಾಸಿದ ರಸ್ತೆ ಪಾಳುಬಿದ್ದ ಮನೆಯ ನೋಡಿ ಕಣ್ತುಂಬಿ ಬಂದಿತ್ತು ನಮ್ಮಜ್ಜಿ ಮನೆ ಪಾಳುಬಿದ್ದಿತ್ತು.........! ಮತ್ತೆ ಕೆಲವೇ ದಿನಗಳಲ್ಲಿ ಬೇರೆ ಯಾರಿಗೋ ಅದನ್ನು ಮಾರಲಾಯ್ತು

       ನನ್ನ ಭಾವನೆಗಳ ಬಯಲ ಹೂದೋಟ ಬಾಲ್ಯದ ನೆನಪುಗಳ ಸ್ವಗ ಈಗ ನೋಡಲೂ ಸಿಗದಷ್ಟು ದೂರ......
ಹೌದು ಮನುಷ್ಯ ಬೆಳೆಯುತ್ತಾನೆ ಅವಷ್ಯಕತೆ ಮನಸ್ಸು ಎಲ್ಲವೂ ಬದಲಾಗತ್ತೆ ಆದರೆ ನಮ್ಮ ಸುತ್ತ ಮೌನವಾಗಿ ತಾಯಿ ಯಂತೆ ಪೊರೆದ ಪರಿಸರ ನವು ಗೆದ್ದೆನೆಂದು  ಬೀಗುವ ನಮ್ಮ ನೋಡಿ ಮೆಲ್ಲಗೆ ನಾವು ಕಳೆದು ಕೋಂಡ ಕ್ಷಣಗಳ ಲೆಕ್ಕ ಕೊಡತ್ತದೆ.......


                                                                                                                               ರಮ್ಯ.ಜೆ........