ಸೋಮವಾರ, ಡಿಸೆಂಬರ್ 23, 2013

ನಿನ್ನ ಪ್ರೇಮದ ಋಣಕ್ಕೆ ಬಿದ್ದೆನೋ
ನೀ ಬೇಕು ಎಂಬ ಹಟಕ್ಕೆ ಬಿದ್ದೆನೋ
ತಿಳಿಯುತ್ತಿಲ್ಲ.........

ಕಟ್ಟಿಟ್ಟ ಕನಸುಗಳನ್ನೆಲ್ಲ
ನನಸು ಮಾಡುವ ಹುಂಬತನ ನಂದು
ತಿಳಿದ್ದಿಲ್ಲ ಇದರ ಅಂತ್ಯ ಏನೆಂದು.....


ಬೇಕೇ ಈ ದಾಸ್ಯ
ಎಂಬ ಪ್ರಶ್ನೆ ಕಾಡಿದರೂ
ನೀ ನಿರದ ಬದುಕಿಗೆ  ಅರ್ಥ ಹುಡುಕುವ
ದೈರ್ಯ ನನಗಿಲ್ಲ .......



               ರಮ್ಯ.ಜೆ


ಗುರುವಾರ, ಅಕ್ಟೋಬರ್ 31, 2013

ಪ್ರೀತಿಗೆ ಎಲ್ಲೆ ಇಲ್ಲ ಅಂದ ಮೇಲೆ 
ಪ್ರೀತಿ ಒಂದು ಅಪೂರ್ಣತೆಯ ಭಾವವಾ....?
ನನಗೇ ಬೇಕು ಎನ್ನುವ ಮನಸಿದ್ದ ಮೇಲೆ 
ಸ್ವಾರ್ಥಕ್ಕೂ ಪ್ರೀತಿಗೂ ಬೇದವೆಲ್ಲಿದೆ.....?

ಕೊಟ್ಟು ಪಡೆಯಲು ಪ್ರೀತಿ
ವ್ಯಾಪಾರವಲ್ಲ ಅಂದ ಮೇಲೆ
ಬರೀ ಪಡೆದವನ
ಋಣದ ಬಾಪ್ತು ತೀರುವುದೆಂತು....?

ಪ್ರೀತಿ ಗುಲಾಮಗಿರಿ ಅಲ್ಲ ಎಂದ ಮೇಲೆ
ಶರಣಾಗುವುದಕ್ಕೆ ಬೇರೆ ಅರ್ಥ ವೇನು
ಪ್ರೀತಿ ಯಲ್ಲಿ ಸೋಲುವುದು ಎಂದರೆ
ಗೆಲ್ಲುವುದಕ್ಕೂ ಬೇರೆ ಅರ್ಥ ವಿದೆಯೇ....?

ಈ ಗೌಜುಗಳು ಸಂತೆ ನನಗೆ ಬೇಡ
ಪ್ರೀತಿ ಅರ್ಥವಾ ಕೆಣಕಿ
ವೇದಾಂತಿ ಯಾಗುವಾ
ಬಯಕೆಯೂ ನನಗಿಲ್ಲ....

ನಲ್ಮೆಯ ಕಣ್ಗಳೋಂದಿಗೆ
ಬದುಕ ಯಾತ್ರೆಯಾ ಮುಗಿಸ ಬಂದಿರುವೆ
ವಾತ್ಸಲ್ಯವೋ ಮಮಕಾರವೋ ಕಡೆಗೆ ಪ್ರೀತಿಯೋ
ನನಗೆ ಅದರ ಅರ್ಥ ಗೊತ್ತಿಲ್ಲ

ನನ್ನದೆಂದು ಸಾಗುತ್ತಿರುವೆ
ಈ....... ದಾರಿ ಕಡೆಗೆ
ಸಾರ್ಥಕತೆಯ ಭಾವ ಉಳಿದರೆ
ಅಷ್ಟೆ ಸಾಕು ಜನುಮದ್ದುದಕ್ಕೂ....

.........ರಮ್ಯ.ಜೆ

ನಾನು ಯಾರು.....?

ನಾನು ಯಾರು.....?
ಹುಟ್ಟುತ್ತಲೆ ಅಸಹನೆಯ 
ಮಾತನ್ನುಮೌನವಾಗಿ
ಅರಗಿಸಿ ಕೋಂಡವಳು

ಶತಮಾನಗಳಿಂದಾಚೆ
ಚರಿತ್ರೆ ಪುಟಗಳಲ್ಲಿ ಮೆರೆದವಳು
ಮತ್ತೆ ನಿನ್ನ ಸ್ವಾರ್ಥಕ್ಕೆ
ಮುಖ ಮುಚ್ಚಿ ಅತ್ತವಳು

ನೂರಾರು ಕನಸ್ಸನ್ನು
ಕಣ್ಣಲ್ಲೆ ಮುಚಿಟ್ಟು
ಕಣ್ಮುಚ್ಚಿ ನನ್ನ
ದಾಳಕ್ಕೆ ಕುಣಿದವಳು

ನಿನ್ನ ನೂರಾರು ಚಾಟಿಯೇಟಿಗೆ
ಬೆನ್ನೊಡ್ಡಿ ನನ್ನ ಅಸ್ತಿತ್ವ ಕಾದು ಕೋಂಡವಳು
ಮತ್ತೆ ನಿನ್ನೆದುರು ತಲೆ ಎತ್ತಿ ನಿಂತವಳು
ಸಮಾನತೆಯ ಅಸ್ತ್ರಬಳಸಿ ನಿನ್ನೆದುರು ಸೆಟೆದು ನಿಂತವಳು

ಅಲ್ಲಿ ಗಂಡನ ಕೈಗೆ ಸಿಕ್ಕಿ ಅರಚಿದವಳು
ಇಲ್ಲಿ ಯಾರದ್ದೋ ತ್ರಿಷೆಗೆ ಮೈಯೋಡ್ಡಿ
ಯಮ ಯಾತನೆಗೆ ಬಲಿಯಾದವಳು
ಮತ್ತೆಲ್ಲೋ ಶಕ್ತಿ ಕುಂದಿದಾಗ ಆಸರೆಗೆ ಅಂಗಲಾಚಿದವಳು

ಹೌದು ನಾನೆ....!
ತಾಯಾಗಿ ಹಾಲುಣಿಸಿದವಳು
ಮಗಳಾಗಿ ಮಮತೆ ಇತ್ತವಳು
ಮಡದಿಯಾಗಿ ಒಲವ ಹಂಚಿದವಳು
ನಾನೀಗ ಕೇಳಬೇಕೆದೆ ನಿನಗೆ, ನಾನು
ನಿನ್ನ ಪಾಲಿಗೆ ಯಾರ......????

                   

                                       ರಮ್ಯ.ಜೆ



                                                                   

            

ಸೋಮವಾರ, ಸೆಪ್ಟೆಂಬರ್ 30, 2013

ಅಜ್ಜಿ ಮನೆ ಈಗ ನೆನಪಷ್ಟೇ......


ತೀರ್ಥಹಳ್ಳಿಯ ಬಳಿ ಹಳ್ಳಿಯ ಮನೆ ನಮ್ಮಜ್ಜಿ ಮನೆ ನನ್ನ ಪಾಲಿಗೆ ಅದು ಬರಿ ಮನೆ ಅಲ್ಲ ನನ್ನ ಬಾಲ್ಯದ ಸಾವಿರ ನೆನಪುಗಳ ಕಣ್ಮಂದೆ ತರಿಸುವ ಸ್ವರ್ಗ.  ಅಕ್ಕ ನೋಂದಿಗೆ ಆಡುತ್ತಿದದ್ದು, ಪಪ್ಪ ತಂದುಕೊಟ್ಟಿದ್ದ ಪ್ಲಾಸ್ಟಿಕ್ ಜೋಕಾಲಿ ಮರಕ್ಕೆ ಕಟ್ಟಿ ದಿನ ಪೂರ ತೂಗುತ್ತಿದ್ದದ್ದು, ತಂಗಿ ತಮ್ಮ ನೋಂದಿಗೆ ಊರುಸುತ್ತಿದ್ದು, ಊರಾಚೆ ಮನೆಯಲ್ಲಿ ಮಾವು ಕದ್ದು ತಿಂದದ್ದು ಎಲ್ಲ ಆಗಾಗ ನನ್ನ ಕಾಡುವ ಮನಕೆ ತಂಪು ತರಿಸುವ ನೆನಪುಗಳು.....

       ಕೆಲವು ದಿನ ಕಳೆದ ನಂತರ ಅಜ್ಜಿ ಮನೆಗೆ ಹೋದಾಗ ಹಳೆಯ ಮನೆಯನ್ನು ನವೀಕರಿಸಿದ್ದರು,  ಎಲ್ಲ ಹೊಸತು ನೋಡಲು ಮುದ ಯೆನಿಸಿದ್ದರೂ, ಮನಸು ಹಳೆಯ ಮನೆಯ ನೆನಪುಗಳಿಂದಾಚೆ ಸಾಗಲು ಬಯಸಿರಲಿಲ್ಲ, ನಾವು ನೆಗೆದಾಡುತ್ತಿದ್ದ ಮಾವ ಮಲಗುತ್ತಿದ್ದ ಸಿಮೆಂಟ್ ನ ಕಟ್ಟೆ ಯ ಜಾಗದಲ್ಲಿ ಕಾಟ್ ಬಂದಿತ್ತು, ದೀಪಾವಳಿಯಲ್ಲಿ ಪಟಾಕಿ ಸದ್ದಿಗೆ ನಾವು ಹೆದರಿ ಅಡಗುತ್ತಿದ್ದ ಅಡುಗೆ ಮನೆ ಈಗ ಮೊದಲಿನಷ್ಟು ವಿಶಾಲವಾಗಿಲ್ಲ ಎಲ್ಲ ಬದಲಾಗಿತ್ತು ಮನಸ್ಸು ಒಪ್ಪದಿದ್ದಷ್ಟು.

ಕೆಲವೇ ವರ್ಷ ದಲ್ಲಿ ಮಾವ ಮಾಮಿ ತೀರಿಕೋಂಡ ಬಳಿಕ ಮತ್ತೆ ಯಾರಿಗು ಆ ಮನೆಯಲ್ಲಿ ಇರುವ ಪರಿಸ್ಥಿತಿಯಾಗಲಿ ಮನಸಾಗಲಿ ಇರಲಿಲ್ಲ,  ಸಂಭಂದಿಕರೊಬ್ಬರ ಮದುವೆಗೆ ಹೋದಾಗ ಮಾಸಿದ ರಸ್ತೆ ಪಾಳುಬಿದ್ದ ಮನೆಯ ನೋಡಿ ಕಣ್ತುಂಬಿ ಬಂದಿತ್ತು ನಮ್ಮಜ್ಜಿ ಮನೆ ಪಾಳುಬಿದ್ದಿತ್ತು.........! ಮತ್ತೆ ಕೆಲವೇ ದಿನಗಳಲ್ಲಿ ಬೇರೆ ಯಾರಿಗೋ ಅದನ್ನು ಮಾರಲಾಯ್ತು

       ನನ್ನ ಭಾವನೆಗಳ ಬಯಲ ಹೂದೋಟ ಬಾಲ್ಯದ ನೆನಪುಗಳ ಸ್ವಗ ಈಗ ನೋಡಲೂ ಸಿಗದಷ್ಟು ದೂರ......
ಹೌದು ಮನುಷ್ಯ ಬೆಳೆಯುತ್ತಾನೆ ಅವಷ್ಯಕತೆ ಮನಸ್ಸು ಎಲ್ಲವೂ ಬದಲಾಗತ್ತೆ ಆದರೆ ನಮ್ಮ ಸುತ್ತ ಮೌನವಾಗಿ ತಾಯಿ ಯಂತೆ ಪೊರೆದ ಪರಿಸರ ನವು ಗೆದ್ದೆನೆಂದು  ಬೀಗುವ ನಮ್ಮ ನೋಡಿ ಮೆಲ್ಲಗೆ ನಾವು ಕಳೆದು ಕೋಂಡ ಕ್ಷಣಗಳ ಲೆಕ್ಕ ಕೊಡತ್ತದೆ.......


                                                                                                                               ರಮ್ಯ.ಜೆ........



  

ಶುಕ್ರವಾರ, ಆಗಸ್ಟ್ 2, 2013

ಮತ್ತೇಕೆ ನನ್ನತ್ತ ನೋಡುವೆ....... !

ಮತ್ತೇಕೆ ನನ್ನತ್ತ ನೋಡುವೆ 
ಇನ್ನೇನೂ ಉಳಿದಿಲ್ಲ 
ನೋವಲ್ಲಿ ಸದಾ ಕುಗ್ಗುತ್ತಿರುವ 
ಹಾಳಾದ ಮನವ ಬಿಟ್ಟು 

ನಿನ್ನೆದೆಯಲ್ಲಿ ನನ್ನ ನಾ 
ಹುಡುಕಲು ಹೋಗಿ 
ಸೋತು ಸೋತು 
ಪರಿತಪಿಸಿದ ನೆನಪುಗಳಾ ಬಿಟ್ಟು 

ಪ್ರತಿ ಬಾವನೆಗಳಿಗೆ ನೀ 
ಎರಚಿದ ಮಸಿಯ ಕಲೆಗಳಲ್ಲಿ 
ಮಂಕಾಗಿ ಗುಟುಕ ಒಲವಿಗಾಗಿ 
ಕಾತರಿಸಿತ್ತಿರುವ ಕಂಗಳಾ ಬಿಟ್ಟು 

ಬಿಟ್ಟು ಸಾಗುವೆನೆಂಬ ನಿನ್ನ 
ಮಾತುಗಳ ಚಾಟಿಯೇಟಿಗೆ 
ಚೇತರಿಕೆ ಕಾಣದಿರುವ 
ನನ್ನ ಒಡೆದ ಹೃದಯವಾ ಬಿಟ್ಟು..... 

               
                                                  ರಮ್ಯ. ಜೆ 




ಬರಬಹುದೇ ಮತ್ತೆ ಮಳೆ

ಎಂದಿಗೂ ಬಾರದ ಕಾಲವಾ 
ಕಾಯುವ ಹುಂಬಳು  ನಾನು,
ಮತ್ತೆ ಕಾಯುತ್ತಿರುವೆ 
ನೀ ಅರ್ಧಕ್ಕೆ ಬಿಟ್ಟು ಹೋದ 
ಕನಸುಗಳ ಪೂರ್ಣಗೊಳಿಸಲು 

ಕನಸೆಂದು ತಿಳಿದಿದೆ 
ಮತ್ತೆ ಉಸಿರಾಡುವುದೆಂಬ 
ಕನವರಿಕೆಯೂ  ಕಾದಿದೆ 
ಬಿಟ್ಟಿ ಸಾಗುವ ದೈರ್ಯ 
ಯಾಕೋ ಬಾರದಿದೆ 


ಬರಬಹುದೇ ಮತ್ತೆ ಮಳೆ 
ಮನದ ಬೆಂಗಾಡಲ್ಲಿ 
ಮೂಡಬಹುದೇ ನಿನ್ನೆದೆಯಲ್ಲಿ 
ನನ್ನೋಡಲ ಒಲವು
ಕಳೆದ ವಸಂತ ಗೀತೆಯಂತೆ ...... 

                                                   ರಮ್ಯ. ಜೆ